ಉಡುಪಿ ಗಣಪತಿ ಸಹಕಾರಿ ವ್ಯವಸಾಯಿ ಕ ಸಂಘ ನಿಯಮಿತ ವಾರ್ಷಿಕ ಮಹಾಸಭೆಯು ದಿನಾಂಕ 29 -08-2026ನೇ ಶನಿವಾರ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಭಾಂಗಣ ಸಂತೆಕಟ್ಟೆ ಕಲ್ಯಾಣಪುರ ಯಶಸ್ವಿಯಾಗಿ ಸಂಘದ ಅಧ್ಯಕ್ಷ ಟಿ ಸತೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸದಸ್ಯರಿಗೆ ಶೇ. 18 ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೃತ ಸದಸ್ಯರ ಆಶ್ರಿತರಿಗೆ ಸಹಾಯಧನ ವಿತರಿಸಲಾಯಿತು.
ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಅಫ್ಜಲ್ ಸಾಹೇಬ್ ನಿರ್ದೇಶಕರುಗಳಾದ ರಮೇಶ್ ಅಮೀನ್ ಪುರುಷೋತ್ತಮ ಸಾಲಿಯಾನ್ ರಾಘವೇಂದ್ರ ಪ್ರಭು ಶ್ಯಾಮ ಏನ್ ಗೋಪಾಲಕೃಷ್ಣ ಹೆಗಡೆ ಹರೀಶ್ ಶೆಟ್ಟಿ ಅನಿಶ್ ಲೇನಿ ಫರ್ನಾಂಡಿಸ್ ಲತಾ, ಪಿ ರಾವ್ ಲಕ್ಷ್ಮಿ ವೆರೋನಿಕ ಕರ್ನೆಲಿಯೋ ಜ್ಯೋತಿ ಲೂಯಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲಿಯಾನ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು