ಉಡುಪಿ, ಜು. 1: ನಗರದ ಹೃದಯ ಭಾಗದಲ್ಲಿರುವ ಶ್ರೀರಾಮ್ ರೆಸಿಡೆನ್ಸಿ ಕಟ್ಟಡದ ನೆಲ ಅಂತಸ್ತಿನಲ್ಲಿ ಆಂದ್ರನಾಡು ಫ್ಯಾಮಿಲಿ ರೆಸ್ಟೋರೆಂಟ್’ ಉದ್ಘಾಟನೆ ಬುಧವಾರ ನೆರವೇರಿತು.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ರಿಬ್ಬನ್ ಕಟ್ ಮಾಡಿ, ದೀಪ ಪ್ರಜ್ವಲ ನಗೈದು ರೆಸ್ಟೋರೆಂಟ್ ಉದ್ಘಾಟಿಸಿ ಮಾತನಾಡಿ,ಹೋಟೆಲ್ ಉದ್ಯಮ ಅಂದರೆ ಶುಚಿ ಮತ್ತೆ ರುಚಿ ಜಗತ್ತಿನಲ್ಲಿ ಹೆಚ್ಚಿನ ವೈವಿಧ್ಯ ಮಯ ಆಹಾರ ಕ್ರಮ ಇರುವುದು ಆಂಧ್ರದಲ್ಲಿ ಅದನ್ನು ಉಡುಪಿಗೆ ಪರಿಚಯಿಸುವ ಕೆಲಸ ಆಂಧ್ರನಾಡು ಫ್ಯಾಮಿಲಿ ರೆಸ್ಟೋರೆಂಟ್ ಮಾಡಲಿದೆ ಎಂಬ ವಿಶ್ವಾಸ ಇದೆಮಕ್ಕಳಿಗೆ ಯಾವ ರೀತಿಯ ಶುಚಿ -ರುಚಿಯಾದ ಆಹಾರ ಬಡಿಸುತ್ತಾರೋ ಅದೇ ಭಾವನೆಯಿಂದ ಈ ಹೊಟೇಲ್ ಮೂಲಕ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಆಹಾರ ಉಣಬಡಿಸು ವಂತಾಗಲಿ ಎಂದರು.
ಈ ರೆಸ್ಟೋರೆಂಟ್ನಲ್ಲಿನ ಆಂಧ್ರ ಶೈಲಿಯ ವೆಜ್ ಆ್ಯಂಡ್ ನಾನ್ವೆಜ್ ಖಾದ್ಯಗಳ ಊಟ ದೊರೆಯಲಿದೆ. ಮಂಗಳೂರು ಮತ್ತು ದೇರಳಕಟ್ಟೆಯಲ್ಲಿ ಈಗಾಗಲೇ ಚಾರ್ ಮಿನರ್ ರೆಸ್ಟೋರೆಂಟ್ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ್ದು ಇದೀಗ ಬೇಡಿಕೆಯ ಮೇರೆಗೆ ಉಡುಪಿ ನಗರದಲ್ಲಿಹೊಟೇಲ್ ತೆರೆಯಲಾಗಿದೆ ಎಂದು ಮಾಲಕರು ತಿಳಿಸಿದರು.
ಶಾಸಕರಾದ ಸುನಿಲ್ ಕುಮಾರ್, ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್ ಶುಭಹಾರೈಸಿದರುಶ್ರೀರಾಮ ರೆಸಿಡೆನ್ಸಿಯ ಮಾಲಕ ಮತ್ತು ಪಾಲುದಾರ ನಾಗರಾಜ್ ಶೆಟ್ಟಿ ಪಾಲುದಾರ ಪುನೀತ್ ಹೆಗ್ಡೆ ಜೆ. ಸುಧೀರ್ ಹೆಗ್ಡೆ ಆದೀಶ್ ಶೆಟ್ಟಿ ಉಜ್ವಲ ಡೆವಲ್ಪರ್ಸ್ನ ಪುರುಷೋತ್ತಮ ಪಿ. ಶೆಟ್ಟಿ ಗೀತಾಂಜಲಿ ಸಿಲ್ಕ್ಸ್ನ ಸಂತೋಷ್ ವಾಗ್ಲೆ ಮತ್ತಿತರರಿದ್ದರು.
