Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಉಚ್ಚಿಲ ದಸರಾ’ಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವರಾದ ಶ್ರೀ ಕೆ ಎಚ್ ಮುನಿಯಪ್ಪರವರು ತಮ್ಮ ಧರ್ಮಪತ್ನಿ ಸಮೇತರಾಗಿ ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ದೇವರ ಪ್ರಸಾದ ನೀಡಿ ದ. ಕ ಮೊಗವೀರ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಗೌರವಿಸಿದರು. ಪ್ರಸಾದ್ ಕಾಂಚನ್,ವಿನಯ್ ಕರ್ಕೇರ ಮಲ್ಪೆ, ಶರಣ್ ಕುಮಾರ್ ಮಟ್ಟು, ಗಿರಿಧರ್ ಸುವರ್ಣ, ದಯಾನಂದ ಕೆ. ಸುವರ್ಣ ಮಲ್ಪೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು,ರತ್ನಾಕರ್ ಸಾಲ್ಯಾನ್,ಯಜ್ನೇಶ್ ಕರ್ಕೇರ ಹೆಜಮಾಡಿ, ಸತೀಶ್ ಸಾಲ್ಯಾನ್ ಮುಂತಾದ ವರು ಉಪಸ್ಥಿತರಿದ್ದರು

Exit mobile version