ಉಡುಪಿ ನ್ಯೂಸ್ ಪ್ಲಸ್

ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಷನ್ (ರಿ)ವಿಶ್ವ ಛಾಯಗ್ರಹಣ ದಿನಾಚರಣೆ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಷನ್ (ರಿ) ಉಡುಪಿ ವಲಯದ ವತಿಯಿಂದ 186 ನೇ ವಿಶ್ವ ಛಾಯಗ್ರಹಣ ದಿನಾಚರಣೆ ಪ್ರಯುಕ್ತ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಪ್ರಸಾದ್ ನೇತ್ರಾಲಯ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ಹಿರಿಯ ಛಾಯಾ ಗ್ರಾಹಕರಾದ ಪಾಡಿಗಾರು ಲಕ್ಷ್ಮಿ ನಾರಾಯಣ ಉಪಾಧ್ಯಾಯ ರವರನ್ನು ಸನ್ಮಾನಿಸಲಾಯಿತು. ಸದಸ್ಯರ ಆರೋಗ್ಯಕ್ಕೆ ಸಹಾಯಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ವಲಯದ ಅಧ್ಯಕ್ಷರಾದ ಸುಧೀರ್ ಎಂ ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್. ಉಡುಪಿ ವಲಯದ ಗೌರವ ಅಧ್ಯಕ್ಷರಾದ ನವೀನ್ ಬಳ್ಳಾಲ್. ಕಾರ್ಯದರ್ಶಿಗಳಾದ ದಿವಾಕರ್ ಹಿರಿಯಡ್ಕ. ರಮೇಶ್ ಭಟ್ ಉಪಸ್ಥರಿದ್ದರು. ಶಿಬಿರದಲ್ಲಿ 70ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು.

Exit mobile version