Site icon ಉಡುಪಿ ನ್ಯೂಸ್ ಪ್ಲಸ್

ಬ್ರಹ್ಮಾವರ : ಕುಂಜಾಲ್ ದನದ ರುಂಡ ರಸ್ತೆಯಲ್ಲಿ ಬಿದ್ದಿರುವ ಪ್ರಕರಣ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ಪೋಲೀಸ್ ವರಿಷ್ಟಾಧಿಕಾರಿಯವರಿಗೆ ಮನವಿ

ಬ್ರಹ್ಮಾವರ ದ ಕುಂಜಾಲ್ ಎಂಬಲ್ಲಿ ದನದ ರುಂಡ ರಸ್ತೆಯಲ್ಲಿ ಬಿದ್ದಿರುವ ಹಾಗೆ ಕಂಡುಬಂದ ಹಿನ್ನಲೆಯಲ್ಲಿ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ ಇದರ ವಿರುದ್ದ ಇಂದು ಮುಸ್ಲೀಂ ಒಕ್ಕೂಟ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕ ಹಾಗೂ ಕುಂಜಾಲು ಮಸೀದಿ ಜಮಾತ್ ಜಂಟಿಯಲ್ಲಿ ಇವತ್ತು ಯಾವುದೇ ಜಾತಿಯವರು ಆಗಿರಲಿ ಆರೋಪಿಗಳನ್ನು ಅತೀ ಶೀಘ್ರ ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಪೋಲೀಸ್ ವರಿಷ್ಟಾಧಿಕಾರಿಯವರಿಗೆ ಮನವಿಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಅವ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್,ಮುಸ್ಲೀಂ ಒಕ್ಕೂಟದ ತಾಜುದ್ದೀನ್ ಬ್ರಹ್ಮಾವರ, ನೂರ್ ಜಾಮೀಯ ಮಸೀದಿ ಅಧ್ಯಕ್ಷ ರಾದ ಶಬ್ಬೀರ್,ಅಲ್ತಾಪ್ ಅಹಮ್ಮದ್,ಶಾಕೀರ್ ಎಂ , ಸುಭಾನ್ ಹೊನ್ನಾಳ,ಸುಜೀದ್ ಖಾನ್,ಸಲಾಂ ಸಾಹೇಬ್,ಹುಸೇನಾರ್,ಆರೀಫ್,ರಿಯಾಜ್ ಮುಂತಾದ ಪ್ರಮುಖರು ಹಾಜರಿದ್ದರು .

Exit mobile version