Site icon ಉಡುಪಿ ನ್ಯೂಸ್ ಪ್ಲಸ್

ಜೂ. 29 (ಭಾನುವಾರ) : ಅಲಯನ್ಸ್ ಇಂಟರ್ನ್ಯಾಶನಲ್ ಉಡುಪಿ ಜಿಲ್ಲೆ ಪದಗ್ರಹಣ

ಕಾಪು: ಭಾರತೀಯ ಮೂಲದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಅಸೋಸಿಯೇಶನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಪೊಡವಿಗೊಡೆಯ ಶ್ರೀ ಕೃಷ್ಣನ ನಾಡು ಉಡುಪಿ ಜಿಲ್ಲೆಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ̧ದ್ದು ಉಡುಪಿ ಅಲಯನ್ಸ್ ಡಿಸ್ಟ್ರಿಕ್ಟ್ 275 ನ ಪದಗ್ರಹಣ ಕಾರ್ಯಕ್ರಮ ‘ಅನುಪಮಾ’ ನಾಳೆ 29 ಜೂನ್ ರಂದು ಕಡಿಯಾಳಿ ಓಶಿಯನ್ ಪರ್ಲ್ ಹೋಟೆಲಿನಲ್ಲಿ ನಡೆಯಲಿದೆ ಎಂದು ಶನಿವಾರ ಕಾಪು ಪತ್ರಿಕಾ ಭವನದಲ್ಲಿ ಅಲಯನ್ಸ್ ಅಂತರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಕುಮಾರ್ ಸಕ್ಸೇನಾ ಹೇಳಿದ್ದಾರೆ. ಉಡುಪಿ ಅಲಯನ್ಸ್ ಡಿಸ್ಟ್ರಿಕ್ಟ್ 275 ನ ಸ್ಥಾಪಕ ಜಿಲ್ಲಾ ಗವರ್ನರ್ ಆಗಿ ಸುನೀಲ್ ಸಾಲ್ಯಾನ್ ಕಡೆಕಾರ್, ಪ್ರಥಮ ಉಪ ಜಿಲ್ಲಾ ಗವರ್ನರ್ ಆಗಿ ಸುನೀಲ್ ಕುಮಾರ್ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಆಗಿ ಸುಧಾಕರ್ ಹೆಗ್ಡೆ ನೇಮಕ ಗೊಂಡಿರುತ್ತಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಅಲಯನ್ಸ್ ಅಂತರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಕುಮಾರ್ ಸಕ್ಸೇನಾ, ಸ್ಥಾಪಕರಾದ ತಿರುಪತಿ ರಾಜು, ಪ್ರಥಮ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಿ. ಬಿ. ಶಾಸ್ತ್ರಿ, ತೃತೀಯ ಅಂತರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ವರ್ ರಾವ್, ಅಂತರಾಷ್ಟ್ರೀಯ ನಿರ್ದೇಶಕ ನಾಗರಾಜ್ ಬಾಯರಿ, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಸಲಹೆಗಾರರಾದ ಶ್ರೀಧರ ಶೇಣವ, ಡಾ ತಲ್ಲೂರು ಶಿವರಾಮ ಶೆಟ್ಟಿ, ಸಂಪುಟ ಕಾರ್ಯದರ್ಶಿ ಡಾ ಜಗದೀಶ್ ಹೊಳ್ಳ , ಸಂಪುಟ ಖಜಾಂಚಿ ರಮಾನಂದ ಶೆಟ್ಟಿಗಾರ್, ಪ್ರಾಂತ್ಯಾಧ್ಯಕ್ಷ ಡಾ ಅಶೋಕ್ ಕುಮಾರ್ ವೈಜಿ, ವಲಯಾಧ್ಯಕ್ಷ ಡಾ ಸಂತೋಷ ಕುಮಾರ್ ಬೈಲೂರು ಮೊದಲಾದವರು ಉಪಸ್ಥಿತರಿರಲಿದ್ದಾರೆ. ಡಾ ಅನುಪಮಾ ಸುನೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಪಿ.ಆರ್. ಓ ಜಯರಾಮ ಆಚಾರ್ಯ ಸಾಲಿಗ್ರಾಮ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ ಕುಮಾರ್ ಸಕ್ಸೇನಾ, ಪ್ರಥಮ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಿ. ಬಿ. ಶಾಸ್ತ್ರಿ, ತೃತೀಯ ಅಂತರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ವರ್ ರಾವ್, ಅಂತರಾಷ್ಟ್ರೀಯ ನಿರ್ದೇಶಕ ನಾಗರಾಜ್ ಬಾಯರಿ, ಸಲಹೆಗಾರರಾದ ಶ್ರೀಧರ ಶೇಣವ, ಡಾ ತಲ್ಲೂರು ಶಿವರಾಮ ಶೆಟ್ಟಿ, ಸಂಪುಟ ಕಾರ್ಯದರ್ಶಿ ಡಾ ಜಗದೀಶ್ ಹೊಳ್ಳ , ಸಂಪುಟ ಖಜಾಂಚಿ ರಮಾನಂದ ಶೆಟ್ಟಿಗಾರ್, ಪ್ರಾಂತ್ಯಾಧ್ಯಕ್ಷ ಡಾ ಅಶೋಕ್ ಕುಮಾರ್ ವೈಜಿ, ವಲಯಾಧ್ಯಕ್ಷ ಡಾ ಸಂತೋಷ ಕುಮಾರ್ ಬೈಲೂರು ಉಪಸ್ಥಿತರಿದ್ದರು.

Exit mobile version