ಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನಿರಂಜನ್ ರಾವ್ ಬೆಳ್ಳೆ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸುಬ್ರಹ್ಮಣ್ಯ ಭಟ್ ಬೆಳ್ಳೆ(ಅರ್ಚಕ/ಪ್ರಧಾನ ಅರ್ಚಕ), ಕೃಷ್ಣ (ಪ.ಜಾತಿ/ಪಂಗಡ), ಸುನಿತಾ ನಾಯಕ್ ,ಸುಜಾತ ಸುವರ್ಣ (ಮಹಿಳೆ) ರವೀಂದ್ರ ಕೋಟ್ಯಾನ್, ಹೆಚ್. ಸುಧಾಕರ್ ಅಮೀನ್, ನಿರಂಜನ್ ಬೆಳ್ಳೆ , ಕರುಣಾಕರ ಶೆಟ್ಟಿ, ರಾಜು ಶೆಟ್ಟಿ (ಸಾಮಾನ್ಯ) ಆಯ್ಕೆಯಾಗಿದ್ದಾರೆ. ಆಡಳಿತಾಧಿಕಾರಿ ಪ್ರದೀಪ್ ಶುಕ್ರವಾರ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಬೆಳ್ಳೆ ಶಿವಾಜಿ ಎಸ್ ಸುವರ್ಣ ಉಪಸ್ಥಿತರಿದ್ದರು.
ಬೆಳ್ಳೆ ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನಿರಂಜನ್ ರಾವ್ ಬೆಳ್ಳೆ ಆಯ್ಕೆ

